ನಿಮ್ ಕಡಿ ಸಾಂಬಾರ್ ಅಂದ್ರೆ ನಮ್ ಕಡಿ ತಿಳಿಯೋದಿಲ್ಲ
ನಮ್ ಕಡಿ ಡಾಂಬರ್ ಅಂದ್ರೆ ನಿಮ್ ಕಡಿ ತಿಳಿಯೋದಿಲ್ಲ
ನಿಮ್ ಕಡಿ ಶಿರಾ ಅಂದ್ರೆ ತಲೆ ಅಂತ ತಿಳ್ಕೊತಿರಿ
ನಮ್ ಕಡಿ ಶಿರಾ ಅಂದ್ರೆ ಕೇಸರಿಬಾತ್ ಅನ್ಕೊತಿವಿ
ಎಂತದು ಎಂತದು ಹಾಡೋದೆಂತ ಕೂಡೋದೆಂತ ಕುಣಿಯೋದೆಂತ
ಹ್ಯಾಂಗಪ್ಪ ಹ್ಯಾಂಗಪ್ಪ ಹಾಡೋದ್ಯಾಂಗ ಕೂಡೋದ್ಯಾಂಗ ಕುಣಿಯೋದ್ಯಾಂಗ
ಬೆಳಗಾವಿಯಾದರೇನು ಬೆಂಗಳೂರು ಆದರೇನು
ನಗಬೇಕು ನಾವು ಮೊದಲು ಮಾತಾಡಲು
ಎದೆ ಭಾಷೆಯ ಅರಿವಾಗಲು ...
ಹುಬ್ಬಳ್ಳಿಯಾದರೇನು ಭದ್ರಾವತಿಯಾದರೇನು
ಬೆರಿಬೇಕು ನಾವು ಮೊದಲು ನಲಿದಾಡಲು
ನಾವೆಲ್ಲರೂ ಸರಿ ಹೋಗಲು ...
ಬೆಂಗಳೂರಲ್ಲಿ ಬೋಂಡ ಅಂದ್ರೆ ಆಲೂಗಡ್ಡೆ ಉಂಡೆಯಂತೆ
ಮಂಗಳೂರಲ್ಲಿ ಬೋಂಡ ಅಂದ್ರೆ ಎಳನೀರ ಕಾಯಂತೆ
ಗದಗಿನಲ್ಲಿ ಪೂರಿ ಜೊತೆ ಬಾಜಿ ಕೊಡ್ತಾರೆ
ಮೈಸೂರಿನಲ್ಲಿ ಕುಸ್ತಿಗಾಗಿ ಬಾಜಿ ಕಟ್ತಾರೆ
ಮೈಸೂರಲಿ ಹೊಲಗದ್ದೆಗೆ ಭೂತಾಯಿ ಅಂತಾರೆ
ಮಂಗಳೂರಲಿ ಒಂದು ಮೀನಿಗೆ ಭೂತಾಯಿ ಅಂತಾರೆ
ನಿಮ್ ಕಡಿ ಹಂಗಿ ಅಂದ್ರೆ ಹೊಗೆಸೊಪ್ಪು ಹಚ್ಚುವುದು ಸೇದುವುದು
ನಮ್ ಕಡಿ ಹಂಗಿ ಅಂದ್ರ ಚೊಕ್ಕ ಮಾಡೋ ಮಾನವರ ನಾಮವದು
ಸಾವಿರ ಹೂವು ಎದೆಹನಿ ಬೇಕು ಜೇನಿನ ಗೂಡಾಗಲು
ಸಾವಿರ ಭಾವ ಸಂಧಿಸಬೇಕು ಕನ್ನಡ ನಾಡಾಗಲು ...
ಹುಳಿಗೆರಿ ಆದರೇನು ಮಡಿಕೇರಿಯಾದರೇನು
ದುಡಿಬೇಕು ನಾವು ಮೊದಲು ದಣಿಯಾಗಲು
ಬಂಗಾರದ ಗಣಿಯಾಗಲು ...
ಯಾವ ಭಾಷೆ ದೊಡ್ಡದು ಯಾವುದು ಚಿಕ್ಕದು
ಯಾವ ಭಾಷೆ ಕಲಿಯೋದು ಯಾವುದ್ ಬಿಡೋದು
ಜಯಭಾರತಿ ಮಡಿಲಲ್ಲಿವೆ ನೂರಾರು ಭಾಷೆಗಳು
ನೂರಾರರು ಗುರಿಯಿಲ್ಲದ ನೂರಾರು ಕವಲುಗಳು
ನೋಟಿನಲ್ಲಿ ಕಾಣುವುದು ಹದಿನಾಲ್ಕು ರಾಜ್ಯಗಳ ಲಿಪಿಗಳು
ಕನ್ನಡಕ್ಕೆ ಅಲ್ಲಿಹುದು ನಾಲ್ಕನೆಯ ದೊಡ್ಡ ಸ್ಥಾನಮಾನಗಳು
ಕನ್ನಡ ನಾಡ ಜನ್ಮದ ಹಿಂದೆ ತ್ಯಾಗಗಳ ಕಥೆಯಿದೆ
ಭೂಪಟದಲ್ಲಿ ಮೆರೆಯಲು ನಮಗೆ ಸಂಸ್ಕೃತಿಯ ಜೊತೆಯಿದೆ ....
ಲಲಾಲ ಲಾಲಾಲಾಲ ಲಲಾಲ ಲಾಲಲಾಲ ಲಲಾಲ ಲಾಲಲಾಲ ಲಲಾಲಲಾ ಲಾಲಲಾಲ ಲಾಲಲಲ || ೨ ॥
ನಮ್ ಕಡಿ ಡಾಂಬರ್ ಅಂದ್ರೆ ನಿಮ್ ಕಡಿ ತಿಳಿಯೋದಿಲ್ಲ
ನಿಮ್ ಕಡಿ ಶಿರಾ ಅಂದ್ರೆ ತಲೆ ಅಂತ ತಿಳ್ಕೊತಿರಿ
ನಮ್ ಕಡಿ ಶಿರಾ ಅಂದ್ರೆ ಕೇಸರಿಬಾತ್ ಅನ್ಕೊತಿವಿ
ಎಂತದು ಎಂತದು ಹಾಡೋದೆಂತ ಕೂಡೋದೆಂತ ಕುಣಿಯೋದೆಂತ
ಹ್ಯಾಂಗಪ್ಪ ಹ್ಯಾಂಗಪ್ಪ ಹಾಡೋದ್ಯಾಂಗ ಕೂಡೋದ್ಯಾಂಗ ಕುಣಿಯೋದ್ಯಾಂಗ
ಬೆಳಗಾವಿಯಾದರೇನು ಬೆಂಗಳೂರು ಆದರೇನು
ನಗಬೇಕು ನಾವು ಮೊದಲು ಮಾತಾಡಲು
ಎದೆ ಭಾಷೆಯ ಅರಿವಾಗಲು ...
ಹುಬ್ಬಳ್ಳಿಯಾದರೇನು ಭದ್ರಾವತಿಯಾದರೇನು
ಬೆರಿಬೇಕು ನಾವು ಮೊದಲು ನಲಿದಾಡಲು
ನಾವೆಲ್ಲರೂ ಸರಿ ಹೋಗಲು ...
ಬೆಂಗಳೂರಲ್ಲಿ ಬೋಂಡ ಅಂದ್ರೆ ಆಲೂಗಡ್ಡೆ ಉಂಡೆಯಂತೆ
ಮಂಗಳೂರಲ್ಲಿ ಬೋಂಡ ಅಂದ್ರೆ ಎಳನೀರ ಕಾಯಂತೆ
ಗದಗಿನಲ್ಲಿ ಪೂರಿ ಜೊತೆ ಬಾಜಿ ಕೊಡ್ತಾರೆ
ಮೈಸೂರಿನಲ್ಲಿ ಕುಸ್ತಿಗಾಗಿ ಬಾಜಿ ಕಟ್ತಾರೆ
ಮೈಸೂರಲಿ ಹೊಲಗದ್ದೆಗೆ ಭೂತಾಯಿ ಅಂತಾರೆ
ಮಂಗಳೂರಲಿ ಒಂದು ಮೀನಿಗೆ ಭೂತಾಯಿ ಅಂತಾರೆ
ನಿಮ್ ಕಡಿ ಹಂಗಿ ಅಂದ್ರೆ ಹೊಗೆಸೊಪ್ಪು ಹಚ್ಚುವುದು ಸೇದುವುದು
ನಮ್ ಕಡಿ ಹಂಗಿ ಅಂದ್ರ ಚೊಕ್ಕ ಮಾಡೋ ಮಾನವರ ನಾಮವದು
ಸಾವಿರ ಹೂವು ಎದೆಹನಿ ಬೇಕು ಜೇನಿನ ಗೂಡಾಗಲು
ಸಾವಿರ ಭಾವ ಸಂಧಿಸಬೇಕು ಕನ್ನಡ ನಾಡಾಗಲು ...
ಹುಳಿಗೆರಿ ಆದರೇನು ಮಡಿಕೇರಿಯಾದರೇನು
ದುಡಿಬೇಕು ನಾವು ಮೊದಲು ದಣಿಯಾಗಲು
ಬಂಗಾರದ ಗಣಿಯಾಗಲು ...
ಯಾವ ಭಾಷೆ ದೊಡ್ಡದು ಯಾವುದು ಚಿಕ್ಕದು
ಯಾವ ಭಾಷೆ ಕಲಿಯೋದು ಯಾವುದ್ ಬಿಡೋದು
ಜಯಭಾರತಿ ಮಡಿಲಲ್ಲಿವೆ ನೂರಾರು ಭಾಷೆಗಳು
ನೂರಾರರು ಗುರಿಯಿಲ್ಲದ ನೂರಾರು ಕವಲುಗಳು
ನೋಟಿನಲ್ಲಿ ಕಾಣುವುದು ಹದಿನಾಲ್ಕು ರಾಜ್ಯಗಳ ಲಿಪಿಗಳು
ಕನ್ನಡಕ್ಕೆ ಅಲ್ಲಿಹುದು ನಾಲ್ಕನೆಯ ದೊಡ್ಡ ಸ್ಥಾನಮಾನಗಳು
ಕನ್ನಡ ನಾಡ ಜನ್ಮದ ಹಿಂದೆ ತ್ಯಾಗಗಳ ಕಥೆಯಿದೆ
ಭೂಪಟದಲ್ಲಿ ಮೆರೆಯಲು ನಮಗೆ ಸಂಸ್ಕೃತಿಯ ಜೊತೆಯಿದೆ ....
ಲಲಾಲ ಲಾಲಾಲಾಲ ಲಲಾಲ ಲಾಲಲಾಲ ಲಲಾಲ ಲಾಲಲಾಲ ಲಲಾಲಲಾ ಲಾಲಲಾಲ ಲಾಲಲಲ || ೨ ॥
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಗಮನಿಸಿ: ಈ ಬ್ಲಾಗ್ನ ಸದಸ್ಯರು ಮಾತ್ರ ಕಾಮೆಂಟ್ಪೋಸ್ಟ್ ಮಾಡಬಹುದು.